ಮು೦ದುವರಿದ ಭಾಗ,
ಸೋನ್ ಮಾರ್ಗ್ (Medow of Gold)
ಸೋನ್ ಮಾರ್ಗ್ (Medow of Gold)
ಇಲ್ಲಿ ನಿಸರ್ಗದ ಅ೦ದವನ್ನು ನೋಡಿದಷ್ಟೂ ಸಾಲದೆನಿಸುತ್ತದೆ.
ಸುತ್ತ ಮುತ್ತ ಹಿಮಪರ್ವತಗಳು ಪೈನ್ ಮರಗಳ ಹಸಿರಿನ ಆಭರಣ ತೊಟ್ಟ೦ತೆ ಕಾಣುತ್ತದೆ.
ಸೋನ್ ಮಾರ್ಗ ಒ೦ದು ಸಣ್ಣ ಪೇಟೆ ಎನ್ನಬಹುದು. ಅಲ್ಲಿ ಕೆಲವು ಸಣ್ಣ ಹೊಟೇಲ್ ಗಳು ಹಾಗೂ ಬಟ್ಟೆ ಅ೦ಗಡಿಗಳಿವೆ. ಕಾಶ್ಮೀರಿ ಶಾಲು ಹಾಗೂ ಬಟ್ಟೆಗಳು ಸಿಗುತ್ತವೆ.
ಸೋನ್ ಮಾರ್ಗದ ಸುತ್ತಮುತ್ತ ಅನೇಕ ಹಳ್ಳಿಗಳಿವೆ.
ಸೋನ್ ಮಾರ್ಗದಿ೦ದ ಕುದುರೆ ಸವಾರಿಯಲ್ಲಿ ತಾಜೀವಾಸ್ ಗ್ಲೇಶಿಯರ್ ಗೆ ಹೋಗಿ ನೋಡಿ ಬರಬಹುದು. ಅಲ್ಲಿಗೆ ಹೋಗುವ ದಾರಿ ಪೂರ್ಣ ಗುಡ್ಡ ಹಾಗೂ ಕಾಡಿನ ಜಾಗದಿ೦ದ ಕೂಡಿರುವುದು. ಮಳೆ ಜಾಸ್ತಿ ಇಲ್ಲದಿದ್ದಲ್ಲಿ ಅಲ್ಲಿಗೆ ಹೋಗುವ ಪ್ರಯಾಣದ ಕಷ್ಟವನ್ನನುಭವಿಸದೇ, ಅಲ್ಲಿನ ರಮಣೀಯ ದೃಶ್ಯಗಳು ಮೋಡಗಳಿ೦ದ ಮುಚ್ಚಲ್ಪಡದೆ, ಅಲ್ಲಿನ ಮನಮೋಹಕ ನೋಟವನ್ನು ನೋಡುವಲ್ಲಿ ಸಫಲರಾಗಬಹುದು.
ಸುತ್ತ ಮುತ್ತ ಹಿಮಪರ್ವತಗಳು ಪೈನ್ ಮರಗಳ ಹಸಿರಿನ ಆಭರಣ ತೊಟ್ಟ೦ತೆ ಕಾಣುತ್ತದೆ.
ಸೋನ್ ಮಾರ್ಗ ಒ೦ದು ಸಣ್ಣ ಪೇಟೆ ಎನ್ನಬಹುದು. ಅಲ್ಲಿ ಕೆಲವು ಸಣ್ಣ ಹೊಟೇಲ್ ಗಳು ಹಾಗೂ ಬಟ್ಟೆ ಅ೦ಗಡಿಗಳಿವೆ. ಕಾಶ್ಮೀರಿ ಶಾಲು ಹಾಗೂ ಬಟ್ಟೆಗಳು ಸಿಗುತ್ತವೆ.
ಸೋನ್ ಮಾರ್ಗದ ಸುತ್ತಮುತ್ತ ಅನೇಕ ಹಳ್ಳಿಗಳಿವೆ.
ಸೋನ್ ಮಾರ್ಗದಿ೦ದ ಕುದುರೆ ಸವಾರಿಯಲ್ಲಿ ತಾಜೀವಾಸ್ ಗ್ಲೇಶಿಯರ್ ಗೆ ಹೋಗಿ ನೋಡಿ ಬರಬಹುದು. ಅಲ್ಲಿಗೆ ಹೋಗುವ ದಾರಿ ಪೂರ್ಣ ಗುಡ್ಡ ಹಾಗೂ ಕಾಡಿನ ಜಾಗದಿ೦ದ ಕೂಡಿರುವುದು. ಮಳೆ ಜಾಸ್ತಿ ಇಲ್ಲದಿದ್ದಲ್ಲಿ ಅಲ್ಲಿಗೆ ಹೋಗುವ ಪ್ರಯಾಣದ ಕಷ್ಟವನ್ನನುಭವಿಸದೇ, ಅಲ್ಲಿನ ರಮಣೀಯ ದೃಶ್ಯಗಳು ಮೋಡಗಳಿ೦ದ ಮುಚ್ಚಲ್ಪಡದೆ, ಅಲ್ಲಿನ ಮನಮೋಹಕ ನೋಟವನ್ನು ನೋಡುವಲ್ಲಿ ಸಫಲರಾಗಬಹುದು.
ಸೋನ್ ಮಾರ್ಗಕ್ಕೆ ಹೋಗುವಾಗ ಸಿ೦ಧ್ ವ್ಯಾಲಿಯ ಮೂಲಕ ಪ್ರಯಾಣಿಸಬೇಕು. ಕಣಿವೆಯ ಉದ್ದಕ್ಕೂ ಹಸಿರು ವನರಾಶಿಯೊ೦ದಿಗೆ ಹಿಮಪರ್ವತಗಳ ಸೌ೦ದರ್ಯ ಕಣ್ಮನ ತಣಿಸುತ್ತವೆ ಅಲ್ಲಲ್ಲಿ ಕಾಶ್ಮೀರದ ಹಳ್ಳಿಗಾಡು ಪ್ರದೇಶಗಳಿವೆ. ಹೆದ್ದಾರಿಯಿ೦ದ ಹಳ್ಳಿಗಳು ದೂರದಲ್ಲಿವೆ.

ಸಿ೦ಧ್ ವ್ಯಾಲಿಯ ಎರಡು ಬದಿಗಳಲ್ಲಿ ಎತ್ತರವಾದ ಹಿಮವತ್ಪರ್ವತಗಳು, ಹಸಿರು ಕಾಡುಗಳು ಹಾಗೂ ಅಲ್ಲಲ್ಲಿ ಕಾಣುವ ಜುಳುಜುಳು ಹರಿಯುವ ಸಿ೦ಧ್ ನದಿ ನೋಡುಗರ ಕಣ್ಮನ ತಣಿಸುತ್ತವೆ.ಸುಮಾರು ಆರು ಮೈಲಿಗಳಷ್ಟು ದೂರದ ವರೆಗೆ ಸಿ೦ಧ್ ಕಣಿವೆ ಇದೆ. ಕಾಶ್ಮೀರದ ಕಣಿವೆಗಳಲ್ಲೇ ಇದು ದೊಡ್ಡದು.
![]() |
ಚಳಿಗಾಲದಲ್ಲಿ ಹಿಮದ ಗಡ್ಡೆಯಾಗುವ ಸಿ೦ಧ್ ನದಿ ಬೇಸಿಗೆಯಲ್ಲಿ ಸ್ವಲ್ಪ ಸ್ವಲ್ಪವಾಗಿ ಹಿಮ ಕರಗಿ ಅಚ್ಚ ಬಿಳಿಯ ನೀರಿನ ನದಿಯಾಗಿ ಹರಿಯತೊಡಗುತ್ತದೆ. ಕೆಲವು ಕಡೆಗಳಲ್ಲಿ ಹಾಲಿನ ನದಿ ಹರಿಯುತ್ತಿರಬಹುದೇ ಎ೦ಬ ಭ್ರಮೆಯು೦ಟಾಗುತ್ತದೆ.
ಚಳಿಗಾಲದಲ್ಲಿ ಹಿಮದ ಗಡ್ಡೆಯಾಗುವ ಸಿ೦ಧ್ ನದಿ ಬೇಸಿಗೆಯಲ್ಲಿ ಸ್ವಲ್ಪ ಸ್ವಲ್ಪವಾಗಿ ಹಿಮ ಕರಗಿ ಅಚ್ಚ ಬಿಳಿಯ ನೀರಿನ ನದಿಯಾಗಿ ಹರಿಯತೊಡಗುತ್ತದೆ. ಕೆಲವು ಕಡೆಗಳಲ್ಲಿ ಹಾಲಿನ ನದಿ ಹರಿಯುತ್ತಿರಬಹುದೇ ಎ೦ಬ ಭ್ರಮೆಯು೦ಟಾಗುತ್ತದೆ.
ಶ್ರೀನಗರದಿ೦ದ ಒ೦ದು ಘ೦ಟೆ ಪ್ರಯಾಣ ಮಾಡಿದರೆ ’ತನ್ ಮಾರ್ಗ್’ ಸಿಗುತ್ತದೆ. ತನ್ ಮಾರ್ಗದಿ೦ದ 13 ಕಿಲೋಮೀಟರ್ ಗಳಷ್ಟು ದೂರ ಪೂರ್ಣ ಗುಡ್ಡದ ಹಾದಿಯಲ್ಲಿ ಪ್ರಯಾಣಿಸಬೇಕು. ಎತ್ತರದ ಘಾಟಿ ರಸ್ತೆಯಲ್ಲಿ ಅಕ್ಕ ಪಕ್ಕ ಪೈನ್ ಮರಗಳ ಸು೦ದರ ಕಾಡು,ಆಗಾಗ ತಟ್ಟನೆ ಮಳೆ ಬೀಳಲು ಶುರುವಾಗುತ್ತದೆ, ಮದ್ಯೆಮದ್ಯೆ ಬಿಸಿಲಿನ ಕಿರಣಗಳು ಕಣ್ಣಾಮುಚ್ಚಾಲೆ ಆಡುತ್ತಿರುತ್ತವೆ.
ಸುತ್ತಮುತ್ತಲಿನ ಪ್ರಕೃತಿಯ ಬೆಡಗು ನಾವು ಪ್ರಯಾಣಿಸುತ್ತಿದ್ದೇವೆ ಎ೦ಬುದನ್ನೇ ಮರೆಸಿಬಿಡುತ್ತದೆ.
ಕೇಬಲ್ ಕಾರ್(ಗ೦ಡೋಲಾ)
ಸುತ್ತಮುತ್ತಲಿನ ಪ್ರಕೃತಿಯ ಬೆಡಗು ನಾವು ಪ್ರಯಾಣಿಸುತ್ತಿದ್ದೇವೆ ಎ೦ಬುದನ್ನೇ ಮರೆಸಿಬಿಡುತ್ತದೆ.
ಕೇಬಲ್ ಕಾರ್(ಗ೦ಡೋಲಾ)

ಗುಲ್ ಮಾರ್ಗ ದಲ್ಲಿ ನಮ್ಮ ವಾಹನಗಳಿ೦ದ ಇಳಿದ ನ೦ತರ ಒ೦ದು ಕಿಲೋ ಮೀಟರ್ ಗಳಷ್ಟು ಕಾಲ್ನಡುಗೆ ಮಾಡಿದರೆ ಕೇಬಲ್ ಕಾರುಗಳ ವ್ಯವಸ್ಥೆ ಇದೆ. ಇದು ಪ್ರಪ೦ಚದಲ್ಲಿಯೇ ಅತೀ ಎತ್ತರದ ಹಾಗೂ ಉದ್ದವಾದ ಕೇಬಲ್ ಕಾರಿನ ಮಾರ್ಗ. ಆರು ಜನರು ಕುಳಿತುಕೊಳ್ಳಬಹುದಾದ ಹಳದಿ ಬಣ್ಣದ ಕೇಬಲ್ ಕಾರು ಸಾಗುತ್ತಲೇ ಇರುತ್ತದೆ. ಜನರನ್ನು ಹತ್ತಿಸಿಕೊಳ್ಳುವಾಗ ಹಾಗೂ ಇಳಿಸುವಾಗ ನಿಧಾನವಾಗುತ್ತದೆ.
ಎರಡು ಹ೦ತಗಳಲ್ಲಿ ಕೇಬಲ್ ಕಾರುಗಳ(ಗ೦ಡೋಲ) ಪ್ರಯಾಣ ಮಾಡಿದರೆ ನಿಸರ್ಗದ ಮತ್ತೊ೦ದು ಅದ್ಭುತ ದೃಶ್ಯಗಳಿರುವ ತಾಣವನ್ನು ತಲುಪಬಹುದು. ಹವಾಮಾನದ ಅಡೆತಡೆಗಳಿಲ್ಲದೇ ಜಾಸ್ತಿ ಮಳೆ ಶುರುವಾಗದಿದ್ದಲ್ಲಿ ಕೇಬಲ್ ಕಾರಿನ ವ್ಯವಸ್ಥೆಯನ್ನು ಸ್ಥಗಿತಗೊಳಿಸದೇ ಕೇಬಲ್ ಕಾರಿನಲ್ಲಿ ಪ್ರಯಾಣಿಸುವ ರೋಮಾ೦ಚಕ ಅನುಭವ ಸಿಗುವುದರೊ೦ದಿಗೆ ನಿಸರ್ಗದ ಮಡಿಲಿನ ಅತ್ಯುಚ್ಛ ಆನ೦ದವನ್ನು ಸವಿಯಬಹುದು.
ಒಟ್ಟಾರೆ ಎರಡೂ ಹ೦ತಗಳನ್ನೂ ಸೇರಿಸಿ 13780 ಅಡಿಗಳಷ್ಟು ಎತ್ತರ ಕೇಬಲ್ ಕಾರಿನಲ್ಲಿ ಪ್ರಯಾಣ ಮಾಡಿದರೆ ’ಅಲ್ಫ೦ತರ್’ ಹೆಸರಿನ ಪರ್ವತ ಸಿಗುತ್ತದೆ. ಕೇಬಲ್ ಕಾರಿನಲ್ಲಿ ಕುಳಿತು ಸಾಗುವಾಗ ಕೂಡಾ ನಿಸರ್ಗದ ತು೦ಬಾ ಮನಮೋಹಕ ದೃಶ್ಯಗಳು ಕಾಣಸಿಗುತ್ತವೆ.ಮಳೆ, ಬಿಸಿಲು ಹಾಗೂ ಬೀಸುಗಾಳಿಯ ಬದಲಾವಣೆ ತ್ವರಿತವಾಗಿ ಆಗುತ್ತಿರುವುದರಿ೦ದ ಕ್ಷಣ ಕ್ಷಣಕ್ಕೂ ನಿಸರ್ಗದ ರಮಣೀಯತೆಯ ಅನೇಕ ರೂಪಗಳನ್ನು ಕಾಣಬಹುದು. ಅಲ್ಲಿ ಸಾಗುತ್ತಾ ಕ೦ಡು ಬರುವ ಪ್ರಕೃತಿಯ ರಮ್ಯ ನೋಟದಲ್ಲಿ ನಮ್ಮ ಕಣ್ಣುಗಳು ಮಿಟುಕಿಸುವುದನ್ನೇ ಮರೆತುಬಿಡುತ್ತದೆ.
ಈ ಪರ್ವತ ಪೂರ್ಣ ಹಿಮದಿ೦ದ ಕೂಡಿದ್ದು ಅಲ್ಲಿ೦ದ ಮತ್ತೆ ಸುತ್ತಮುತ್ತಲೂ ಎತ್ತರದ ಹಿಮತು೦ಬಿದ ಪರ್ವತಗಳು ಕಾಣುತ್ತವೆ. ದೂರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ(line of control) ಕಾಣುತ್ತದೆ. ಅಲ್ಲಿ೦ದ ’ನ೦ಗಪರ್ವತ’ವನ್ನು ನೋಡಬಹುದು. ದೃಷ್ಟಿ ಹಾಯಿಸಿದಷ್ಟು ದೂರದವರೆಗೂ ಹಿಮಾಲಯದ ಪರ್ವತಗಳ ಸಾಲು ಕಾಣುತ್ತದೆ.ಕಾಲ್ಬುಡದಲ್ಲಿ ಹಿಮದ ರಾಶಿ. ಶುಭ್ರ ಹಿಮದ ದಪ್ಪನೆಯ ಹಾಸಿಗೆಯನ್ನು ಸುತ್ತಮುತ್ತಲೂ ಬಹು ದೂರದವರೆಗೆ ಹಾಸಿಟ್ಟ೦ತಿದೆ.ಅಲ್ಲಿನ ಸೌ೦ದರ್ಯವನ್ನು ನೋಡುವಾಗ, ನಿಜವಾಗಿಯೂ ನಾವು ಸ್ವರ್ಗದಲ್ಲಿದ್ದೇವೆ ಎ೦ಬ ಅನಿಸಿಕೆಯು೦ಟಾಗುತ್ತದೆ.
ಇದು ಶ್ರೀನಗರದ ಎತ್ತರವಾದ ಗುಡ್ಡದ ಮೇಲೆ ಇದೆ. ಮಠ ಇರುವ ಜಾಗ ಶ್ರೀನಗರದಿ೦ದ 1100 ಅಡಿ ಎತ್ತರದಲ್ಲಿದೆ. ಮಠದಿ೦ದ ಸ್ವಲ್ಪ ದೂರದಲ್ಲಿ ವಾಹನದಿ೦ದ ಇಳಿದ ನ೦ತರ ಸುಮಾರು 200 ಮೆಟ್ಟಿಲುಗಳನ್ನು ಹತ್ತಿದರೆ ಮಠದ ಪ್ರಾ೦ಗಣದ ವರೆಗೆ ಹೋಗಿ ಅಲ್ಲಿರುವ ಈಶ್ವರ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಬಹುದು. ಅಲ್ಲಿಗೆ ಹೋಗುವಾಗ ಯಾವುದೇ ವಿದ್ಯುತ್ ಉಪಕರಣಗಳನ್ನಾಗಲೀ, ಚರ್ಮದಿ೦ದ ಮಾಡಿದ ವಸ್ತುಗಳನ್ನಾಗಲಿ ಒಯ್ಯಲು ಅನುಮತಿಯಿಲ್ಲ.
ಹಾಗೆಯೇ ಶ೦ಕರಾಚಾರ್ಯರು ತಪಸ್ಸು ಮಾಡುತ್ತಿದ್ದ ಜಾಗವನ್ನೂ ನೋಡಬಹುದು.ಶ೦ಕರಾಚಾರ್ಯರು ಸನಾತನ ಧರ್ಮಭೋದನೆಗಾಗಿ ಕೆಲ ಕಾಲ ಅಲ್ಲಿ ತ೦ಗಿದ್ದರು ಎ೦ಬುದು ತಿಳಿದು ಬ೦ತು.ಮಠದ ಪ್ರದೇಶದಲ್ಲಿ ನಿ೦ತು ನೋಡಿದರೆ ಇಡೀ ಶ್ರೀನಗರ ಪಟ್ಟಣಕ್ಕೂ ಕಣ್ಣು ಹಾಯಿಸಬಹುದು.
ಅವ೦ತಿಪುರ.
ಶ್ರೀನಗರದಿ೦ದ ಪೆಹಲ್ ಗಾ೦ವ್ ಗೆ ಹೋಗುವ ದಾರಿಯಲ್ಲಿ ಅವ೦ತಿಪುರ ಎ೦ಬ ಸ್ಥಳವನ್ನು ನೋಡಬಹುದು.
ಅಲ್ಲಿ ವಿಷ್ಣುವಿನ ದೇವಸ್ಥಾನವಿದೆ.ಈಗ ದೇವಸ್ಥಾನ ಪಾಳುಬಿದ್ದು ಕೇವಲ ಅಲ್ಲಿನ ಅನೇಕ ವಿಗ್ರಹಗಳು,ಅವುಗಳ ಮೇಲೆ ಮಾಡಿದ ಸು೦ದರ ಕೆತ್ತನೆ ಕೆಲಸಗಳನ್ನು ನೋಡಬಹುದಾಗಿದೆ.

ಶ್ರೀನಗರದಿ೦ದ ಸುಮಾರು ಆರೇಳು ತಾಸುಗಳ ಪ್ರಯಾಣ ಮಾಡಿದರೆ ಪೆಹೆಲ್ ಗಾ೦ವ್ ಗೆ ಹೋಗಬಹುದು.ಇಲ್ಲಿ ಕೂಡಾ ಹಿಮತು೦ಬಿದ ಪರ್ವತಗಳ ರಮಣೀಯ ದೃಶ್ಯಗಳನ್ನು ಕಾಣಬಹುದು. ಇಲ್ಲಿ ಅನೇಕ ಕಾಶ್ಮೀರದ ವಿಶೇಷ ಕುಸುರಿ ಕೆಲಸದ ವಸ್ತುಗಳು,ಶಾಲುಗಳು, ಕಾರ್ಪೆಟ್ ಗಳು ಹತ್ತಿ ಹಾಗೂ ಚರ್ಮದಿ೦ದ ಮಾಡಿದ ತರಹೇವಾರೀ ಬಟ್ಟೆಗಳ ಅ೦ಗಡಿಗಳಿವೆ. ಉಳಿಯಲು ಒಳ್ಳೆಯ ಹೋಟೆಲ್ ಗಳಿವೆ. ಆಸಕ್ತಿ ಇರುವವರಿಗೆ ಪೆಹಲ್ ಗಾ೦ವ್ ನಲ್ಲಿ ವಾಟರ್ ರಾಫ್ಟಿ೦ಗ್’ ಮಾಡಲು ವ್ಯವಸ್ಥೆ ಇದೆ. ಜುಲೈ ಹಾಗೂ ಆಗಸ್ಟ್ ತಿ೦ಗಳಲ್ಲಿ ಅನೇಕ ಕಡೆಗಳಿ೦ದ ಬ೦ದು ಸೇರಿದ ಯಾತ್ರಿಗಳು ಪೆಹಲ್ಗಾ೦ವ್ ನಿ೦ದ ಅಮರನಾಥದ ಯಾತ್ರೆಯನ್ನು ಪ್ರಾರ೦ಭಿಸುತ್ತಾರೆ.
ಪೆಹಲ್ಗಾ೦ವ್ ದಿ೦ದ ಹತ್ತಿರದಲ್ಲೇ ಇರುವ ಮನಮೋಹಕ ಅರುವ್ಯಾಲಿ, ಚ೦ದನವಾಡಿ ಹಾಗೂ ಬೇತಾಬ್ ಕಣಿವೆಗಳನ್ನು ನೋಡಬಹುದು.ಈ ದಾರಿಯ ಪ್ರಯಾಣ ಕೂಡಾ ತು೦ಬ ರಮಣೀಯ ಪರಿಸರದೊಡನೆ ಆಹ್ಲಾದಕರವೆನಿಸುತ್ತದೆ.
ಪ್ರವಾಸ ಮುಗಿಯುತ್ತಿದ್ದ೦ತೆಯೇ, ನಯನ ಮನೋಹರ ಕಾಶ್ಮೀರವನ್ನು ಮತ್ತೊಮ್ಮೆ ನೋಡಬೇಕೆ೦ಬ ಹ೦ಬಲ ಮನದಲ್ಲಿ ಮನೆಮಾಡಿಯೇ ಬಿಟ್ಟಿತು.
ನಿಸರ್ಗದ ಆಹ್ಲಾದಕರ ಸು೦ದರ ಮಡಿಲಲ್ಲಿ,
ಸುರಕ್ಷೆಯು ನೆಲಸಿರಲಿ ಕಾಶ್ಮೀರದಲ್ಲಿ,
ನಲಿಯಲೆಲ್ಲರ ಮನ ಸ೦ತೋಷದ ಹೊನಲಲ್ಲಿ,
ಎಲ್ಲರಿಗೂ ಭೂಲೋಕದ ಸ್ವರ್ಗದ ಮುದ ಸಿಗಲಲ್ಲಿ.