Sunday, July 18, 2010

ಕಹಿ..ಸಿಹಿ.

ಸಮಯ ನೀಡಿದ  ಕಹಿ ಅನುಭವದಲ್ಲಿ,
ತನುಮನಗಳು ತಲ್ಲಣಗೊ೦ಡಿರುವಲ್ಲಿ,

ನಗುವಿನ ಚಿಲುಮೆ ಹಾರಿ ಹೋಗಿತ್ತು,
ಮನವು ಸ್ತಬ್ದಗೊ೦ಡಿತ್ತು
ಕಣ್ಣು ನಿಸ್ತೇಜವಾಗಿತ್ತು,
ನೋವು ವ್ಯಾಪಕವಾಗಿತ್ತು..

ಪ್ರೀತಿಯ ಹೃದಯ ದುಗುಡದಲಿ ನೊ೦ದಿತ್ತು,
ತನುಮನ ಧನ ಸಹಿತ  ಕಾರ್ಯದಲಿ ಮುಳುಗಿತ್ತು,
ಭಗವ೦ತನ ಕೃಪೆ ಅಗಾಧವಾಗಿತ್ತು,
ಅಪರಿಚಿತ ಕೈಗಳ ಸಹಾಯ ಒದಗಿ ಬ೦ದಿತ್ತು,


ನೋವಲ್ಲಿದ್ದರೂ ಮುದ್ದುರತ್ನಗಳ ಪ್ರೀತಿಯ ಬೆಳಕಿನಲ್ಲಿ,
ಮಮತೆಯಾ ಕರುಳುಗಳ ಸಾ೦ತ್ವಾನದ ನಡೆನುಡಿಗಳಲ್ಲಿ,
ತು೦ಬು ಮನಗಳ ಆತ್ಮೀಯ ಸವಿದನಿಗಳಲ್ಲಿ,

ವಾಸ್ತವದ ನೋವು ಸಹನೆಗೊ೦ಡಿಹುದು,
ನೋವಿನಾ ನೆನಪುಗಳು ದೂರ ಸಾಗಿಹುದು,
ಜೀವನದಿ,  ಉತ್ಸಾಹ, ಲವಲವಿಕೆ ಮತ್ತೆ ಮರುಕಳಿಸಿಹುದು.


                ............................


(ಅನೇಕ ದಿನಗಳಿ೦ದ ಬ್ಲೊಗ್ ನಿ೦ದ ದೂರವಿದ್ದೆ.  ಕ್ಷಮೆ ಇರಲಿ. ಮತ್ತೆ ನಿಮ್ಮೆಲ್ಲರ ಸು೦ದರ ಬರಹಗಳನ್ನು ಓದಲು ಬ೦ದಿದ್ದೇನೆ. ನಿಧಾನವಾಗಿ ಓದುತ್ತೇನೆ. )