ಮಹಾ ಶಿವರಾತ್ರಿ ಪ್ರಯುಕ್ತ ಕವನ
ಶಿವ
ಈಶಜಗದೀಶ ತ್ರಿಪುರಾಂತಕೇಶ್ವರ
ಕರುಣಿಸೆಮಗೆನೀ ಎಂದೆಂದೂ ಶುಭಕರ
ನಿನಗೆ ಮೆಚ್ಚುಗೆ ಡೋಲು ಢಮರುಗದ ಝೇಂಕಾರ
ನಿನ್ನ ನಾಮದ ನಾದ ಅದುವೆ ಓಂಕಾರ
ಗೌರೀಪ್ರಿಯ ನೀಲಕಂಠ ಹರ ಗಂಗಾಧರ
ನಂದೀವಾಹನ ಚಂದ್ರಮೌಳಿ ಬಾ ಬೇಗ ಶಶಿಧರ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಮಹಾ ರೌದ್ರೇಶ್ವರ
ಭವದ ಬವಣೆಯ ನೀಗಿ ಸುಖ ನೀಡು ಸರ್ವೇಶ್ವರ
ಬಿಲ್ವಪ್ರಿಯ ಭಸ್ಮ ಲೇಪಿತ ಶಂಭೋಶಂಕರ
ರಕ್ಷಿಸಿ ಕಾಪಾಡು ಭಕ್ತರನು ದೇವದೇವೇಶ್ವರ
ಅನುದಿನವು ಭಜಿಸುವೆವು ಪೊರೆ ಪರಮೇಶ್ವರ
ಅಂಧಕಾರವನಳಿಸಿ ಬೆಳಕ ನೀಡು ಮಹದೇಶ್ವರ
🙏🙏
ಮನಮುಕ್ತ
2 comments:
ಪರಮೇಶ್ವರನು ನಮಗೆಲ್ಲರಿಗೂ ಮಂಗಲವನ್ನು ಕರುಣಿಸಲಿ.
ಧನ್ಯವಾದಗಳು ಕಾಕಾ 🙏
Post a Comment