Saturday, March 13, 2021

 ಮಹಾ ಶಿವರಾತ್ರಿ ಪ್ರಯುಕ್ತ ಕವನ


ಶಿವ


ಈಶಜಗದೀಶ ತ್ರಿಪುರಾಂತಕೇಶ್ವರ

ಕರುಣಿಸೆಮಗೆನೀ ಎಂದೆಂದೂ ಶುಭಕರ

ನಿನಗೆ ಮೆಚ್ಚುಗೆ ಡೋಲು ಢಮರುಗದ ಝೇಂಕಾರ

ನಿನ್ನ ನಾಮದ ನಾದ ಅದುವೆ ಓಂಕಾರ


ಗೌರೀಪ್ರಿಯ ನೀಲಕಂಠ ಹರ ಗಂಗಾಧರ

ನಂದೀವಾಹನ ಚಂದ್ರಮೌಳಿ ಬಾ ಬೇಗ ಶಶಿಧರ

ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯ ಮಹಾ ರೌದ್ರೇಶ್ವರ

ಭವದ ಬವಣೆಯ ನೀಗಿ ಸುಖ ನೀಡು ಸರ್ವೇಶ್ವರ


ಬಿಲ್ವಪ್ರಿಯ ಭಸ್ಮ ಲೇಪಿತ ಶಂಭೋಶಂಕರ

ರಕ್ಷಿಸಿ ಕಾಪಾಡು ಭಕ್ತರನು ದೇವದೇವೇಶ್ವರ

ಅನುದಿನವು ಭಜಿಸುವೆವು ಪೊರೆ ಪರಮೇಶ್ವರ

ಅಂಧಕಾರವನಳಿಸಿ ಬೆಳಕ ನೀಡು ಮಹದೇಶ್ವರ

🙏🙏


ಮನಮುಕ್ತ

2 comments:

sunaath said...

ಪರಮೇಶ್ವರನು ನಮಗೆಲ್ಲರಿಗೂ ಮಂಗಲವನ್ನು ಕರುಣಿಸಲಿ.

ಮನಮುಕ್ತಾ said...

ಧನ್ಯವಾದಗಳು ಕಾಕಾ 🙏