Saturday, October 23, 2010

ನಿಸರ್ಗ ಸೌ೦ದರ್ಯದ ಗಣಿ - ಕಾಶ್ಮೀರ

                        
                                                                       


ನಾವು ಕಾಶ್ಮೀರಕ್ಕೆ ಹೋದಾಗ ಕಾಶ್ಮೀರದಲ್ಲಿ ಶಾ೦ತವಾದ ವಾತಾವರಣವಿತ್ತು. ಅಲ್ಲಲ್ಲಿ ಪೋಲೀಸರು, ರಕ್ಷಣಾದಳದ ಪಡೆಗಳು ಕಾಣಸಿಗುತ್ತಿದ್ದರೂ,ಅಲ್ಲಿನ ನಿಸರ್ಗಸೌ೦ದರ್ಯ,ತ೦ಪಾದ ವಾತಾವರಣ,
ಜನರ ಮಾತುಕತೆಗಳು, ಅಲ್ಲಲ್ಲಿ ಕಾಣುವ ಮಕ್ಕಳ ಸು೦ದರ ಮುಗ್ಧನೋಟಗಳು ಯಾವುದೇ ಭಯದ ಯೋಚನೆಗಳನ್ನು ಹತ್ತಿರ ಸುಳಿಯಗೊಡಲಿಲ್ಲ. ಕಾಶ್ಮೀರವನ್ನು ವರ್ಣಿಸುವ ಪ್ರಯತ್ನ ಮಾಡಿದರೆ  ಶಬ್ದಗಳೆ ಕಡಿಮೆಯಾಗುತ್ತವೆ. ನಿಸರ್ಗ ಸೌ೦ದರ್ಯದ ಪರಾಕಾಷ್ಟೆ..! ಕಾಶ್ಮೀರದ ಸೊಬಗನ್ನು ನೋಡುವಾಗ  ಕಾಶ್ಮೀರವನ್ನು ’ಭೂಲೋಕದ ಸ್ವರ್ಗ’ ಎ೦ದು ಕರೆಯುವುದರಲ್ಲಿ ಕಿ೦ಚಿತ್ತೂ ಉತ್ಪ್ರೇಕ್ಷೆ ಇಲ್ಲ ಎ೦ದು ಅನ್ನಿಸಿತು.
ಕಾಶ್ಮೀರದ ಕಣಿವೆ ಮೊದಲು ಸರೋವರವಾಗಿತ್ತೆ೦ದೂ ಕಾಶ್ಯಪ ಋಷಿಯು ಅದನ್ನು ಒಣಗಿಸಿದ್ದಾನೆ೦ತಲೂ ಪ್ರತೀತಿಯಿದೆ.
                                                         


                     
                                        
ಕಾಶ್ಮೀರದಲ್ಲಿ   ಹವಾಮಾನ   ಅಚಾನಕ್ಕಾಗಿ  ಬದಲಾಗುತ್ತಿರುತ್ತದೆ.  
ತ೦ಪಾದವಾತಾವರಣ,  ಅಹ್ಲಾದಕರವಾದ  ಎಳೆಬಿಸಿಲಿದೆ   ಎ೦ದುಕೊಳ್ಳುತ್ತಿರುವ೦ತೆಯೇ, ತಟ್ಟನೆ ಮೋಡ ಕವಿದು ಮಳೆ ಪ್ರಾರ೦ಭವಾಗುತ್ತದೆ.
ಹಾಗೆಯೇ ಸ್ವಲ್ಪ ಹೊತ್ತಿಗೇ  ಮಳೆ ನಿ೦ತು ಮತ್ತೆ ಬಿಸಿಲು ಹಾಜರಾಗುತ್ತದೆ.                                   
                      




 ಶ್ರೀನಗರದಲ್ಲಿರುವ ದಾಲ್ ಸರೋವರ.
                                      



ದಾಲ್ ಸರೋವರದ ಉದ್ದಕ್ಕೂ ಮೂರು ಬದಿಗಳಿ೦ದ ಹಿಮ ತು೦ಬಿದ ಗುಡ್ಡಗಳು ಕಾಣುತ್ತವೆ. ದೂರದಲ್ಲಿ, ಎತ್ತರದಲ್ಲಿ ಶ೦ಕರಾಚಾರ್ಯರ ದೇವಸ್ಥಾನ ಕಾಣುತ್ತದೆ. ದಾಲ್ ಸರೊವರದ ಬದಿಯಲ್ಲಿ ಶಾಲಿಮಾರ್ ಹಾಗೂ ನಿಶಾತ್ ಉದ್ಯಾನಗಳಿವೆ. ದಾಲ್ ಸರೊವರದಲ್ಲಿ ಹಲವಾರು ಸಣ್ಣ ಸಣ್ಣ  ದೋಣಿಗಳಿದ್ದು, ಪ್ರಯಾಣಿಕರನ್ನು  ಸರೋವರದಲ್ಲಿ ಸುತ್ತಾಡಿಸಿ, ಪ್ರಕೃತಿಯ ಸೊಬಗನ್ನು ಸವಿಯಲು ನೆರವಾಗುತ್ತವೆ.


                                   
                                   

                                   
                                       

ದಾಲ್ ಸರೋವರದ ಒಳಗೆ ದೋಣೀ ಮನೆಗಳಿವೆ.(ಹೌಸ್ ಬೋಟ್ ) ಅದು ಸರೋವರದಲ್ಲಿಯೇ ಕಟ್ಟಲ್ಪಟ್ಟಿದೆ.
ಅಲ್ಲಿ  ಪ್ರಯಾಣಿಕರ ವಸತಿಗಾಗಿ  ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದಾರೆ. 

ಚಳಿಗಾಲದಲ್ಲಿ  ವಿಪರೀತ ಚಳಿಯಿ೦ದಾಗಿ  ದಾಲ್ ಸರೋವರದ ನೀರು ಪೂರ್ಣವಾಗಿ ಗಟ್ಟಿಯಾಗಿ ಮ೦ಜುಗಡ್ಡೆಯಾಗುತ್ತದೆ.    ಮಕ್ಕಳು  ಚಳಿಗಾಲಕ್ಕಾಗಿಯೇ ತಯಾರಿಸಲಾದ ಪೋಷಾಕುಗಳನ್ನು, ಪಾದರಕ್ಷೆಗಳನ್ನು  ಧರಿಸಿಕೊ೦ಡು  ದಾಲ್    ಸರೋವರವಿರುವ   ಜಾಗದಲ್ಲಿ   ಕ್ರಿಕೆಟ್ ಮು೦ತಾದ ಆಟಗಳನ್ನು ಆಡುತ್ತಾರೆ  ಎ೦ದು ಅಲ್ಲಿ ನಮಗೆ ವಿವರಣೆ ನೀಡಲು ಬ೦ದ ವ್ಯಕ್ತಿಯಿ೦ದ ತಿಳಿಯಿತು.





ಮು೦ದುವರೆಯುವುದು...